ಆಡ ಪೇಟ್ಟನಂ (ತೆಲುಗು தாத்தப்பட்டன்) ೧೯೫೮ರಲ್ಲಿ ತೆರೆಕಂಡ ತೆಲುಗು ಭಾಷೆಯ ಚಲನಚಿತ್ರ. ಇದನ್ನು ಎಂ. ನಾರಾಯಣ ಸ್ವಾಮಿ ಮತ್ತು ಎಂ. ವೆಂಕಟ ರಾಮದಾಸು ನಿರ್ಮಿಸಿದ್ದಾರೆ ಮತ್ತು ಅದುರ್ತಿ ಸುಬ್ಬಾ ರಾವ್ ನಿರ್ದೇಶಿಸಿದ್ದಾರೆ. ಇದರಲ್ಲಿ ಅಕ್ಕಿನೇನಿ ನಾಗೇಶ್ವರ ರಾವ್, ಅಂಜಲಿ ದೇವಿ ನಟಿಸಿದ್ದಾರೆ ಮತ್ತು ಎಸ್. ರಾಜೇಶ್ವರ ರಾವ್ ಮತ್ತು ಮಾಸ್ಟರ್ ವೇಣು ಜಂಟಿಯಾಗಿ ಸಂಗೀತ ಸಂಯೋಜಿಸಿದ್ದಾರೆ. ಆರಂಭದಲ್ಲಿ ಅನಿಸೆಟ್ಟಿ ಅವರು ಈ ಚಿತ್ರದ ನಿರ್ದೇಶಕರೆಂದು ಘೋಷಿಸಲಾಯಿತು. ಆದರೆ ನಂತರ ಆದುರ್ತಿ ಸುಬ್ಬಾ ರಾವ್ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು. == ಕಥಾವಸ್ತು == ಈ ಚಿತ್ರವು ಗಣಪತಿ ಮತ್ತು ರಂಗಮ್ಮ ದಂಪತಿಗಳಿಗೆ ಕೃಷ್ಣ ಮತ್ತು ಸ್ವರಾಜ್ಯ ಎಂಬ ಇಬ್ಬರು ಮಕ್ಕಳಿದ್ದ ಹಳ್ಳಿಯ ಚಿತ್ರಣದೊಂದಿಗೆ ಪ್ರಾರಂಭವಾಗುತ್ತದೆ. ಕೃಷ್ಣನು ಮೊದಲ ಪತ್ನಿಯ ಸಂತತಿಯಾಗಿರುವುದರಿಂದ ವಿರಾಗೋ ರಂಗಮ್ಮನು ಅವನನ್ನು ಅಪಹಾಸ್ಯ ಮಾಡುತ್ತಾಳೆ . ಕೃಷ್ಣನು ತನ್ನ ಬಾಲ್ಯ ಸಂಗಾತಿಯಾದ ಶಾಲಾ ಶಿಕ್ಷಕ ರಾಮಯ್ಯನ ಮಗಳಾದ ರಾಧೆಯನ್ನು ಪ್ರೀತಿಸುತ್ತಾನೆ. ಅದನ್ನು ತಿಳಿದ ರಾಮಯ್ಯ ಮದುವೆಯ ಪ್ರಸ್ತಾಪ ತರುತ್ತಾನೆ. ಆದರೆ ರಂಗಮ್ಮ ವರದಕ್ಷಿಣೆ ರೂಪದಲ್ಲಿ ೧೦೦೦೦ ರೂಪಾಯಿಗಳನ್ನು ಕೇಳುತ್ತಾಳೆ. ಈ ಸಾಲಕ್ಕಾಗಿ ರಾಮಯ್ಯನು ಸಾಲ ಕೊಡುವ ದೊಡ್ಡ ಕುಳ ಪಂಚಾಯಿತಿ ಅಧ್ಯಕ್ಷ ಕೊಂಡಯ್ಯನ ಬಳಿಗೆ ಹೋಗುತ್ತಾನೆ. ಆತ ಗ್ರಾಮಸ್ಥರನ್ನು ತುಳಿಯುತ್ತಿರುತ್ತಾನೆ. ರಾಮಯ್ಯನು ತನ್ನ ಆಸ್ತಿಯನ್ನು ಅಡವಿಟ್ಟು ಮಾಡಿ ಆ ಮೊತ್ತವನ್ನು ಪಡೆಯುತ್ತಾನೆ. ಸಾಲ ಕೊಟ್ಟರೂ ಕೊಂಡಯ್ಯನಿಗೆ ರಾಧೆಯ ಮೇಲೆ ಒಂದು ಕಣ್ಣಿರುತ್ತದೆ. ಆದ್ದರಿಂದ ಅವನು ಆ ಸಾಲ ಕೊಟ್ಟ ಮೊತ್ತವನ್ನು ಕದಿಯುತ್ತಾನೆ . ವರದಕ್ಷಿಣೆ ಕೊಡಲಾಗದ್ದರಿಂದ ಮದುವೆಯನ್ನು ರದ್ದುಗೊಳಿಸಲಾಗುತ್ತದೆ. ಆ ದುರವಸ್ಥೆಯ ಸಮಯದಲ್ಲಿ ರಾಧಾ ಆತ್ಮಹತ್ಯೆಗೆ ಪ್ರಯತ್ನಿಸಿದಾಗ ರಾಮಯ್ಯನು ರಾಧೆಯನ್ನು ಕೊಂಡಯ್ಯನೊಂದಿಗೆ ಮದುವೆ ಮಾಡಿಕೊಡಲು ಒಪ್ಪುತ್ತಾನೆ. ಈ ವಿಪತ್ತಿನಲ್ಲಿ ಕೃಷ್ಣನು ಅವಳನ್ನು ರಕ್ಷಿಸುತ್ತಾನೆ ಮತ್ತು ಬೆಂಬಲಿಸುತ್ತಾನೆ. ಇದರ ಪರಿಣಾಮವಾಗಿ ಅವನು ಮನೆಯಿಂದ ಹೊರಟು ಹೋಗುತ್ತಾನೆ. ಅದೇ ಸಮಯದಲ್ಲಿ ರಂಗ ಕಲಾವಿದರಾದ ಲೋಖಾನಧಾಮ್ ರಂಗಮ್ಮಳನ್ನು ಬಲೆಗೆ ಬೀಳಿಸಿ, ಅವರ ಮನೆಗೆ ನುಸುಳಿ ಸ್ವರಾಜ್ಯಳನ್ನು ಮದುವೆಯಾಗುತ್ತಾನೆ. ಮಗಳ ಮದುವೆ ಮುರಿದು ಬಿದ್ದ ನೋವಲ್ಲೇ ರಾಮಯ್ಯನು ಮರಣಹೊಂದುತ್ತಾನೆ ಮತ್ತು ಕೊಂಡಯ್ಯನು ಅವನ ಆಸ್ತಿಯನ್ನು ವಶಪಡಿಸಿಕೊಳ್ಳುತ್ತಾನೆ. ಕೃಷ್ಣನು ಗ್ರಾಮದಲ್ಲಿ ಶಾಲೆ ಮತ್ತು ಸಹಕಾರಿ ಬ್ಯಾಂಕ್ ಅನ್ನು ಸ್ಥಾಪಿಸುತ್ತಾನೆ ಮತ್ತು ನಿರ್ಗತಿಕರ ಜೀವನಶೈಲಿಯನ್ನು ಸುಧಾರಿಸುತ್ತಾನೆ. ಇದು ಕೊಂಡಯ್ಯನನ್ನು ಕೆರಳಿಸುತ್ತದೆ. ಅಂತಿಮವಾಗಿ, ಲೋಖಾನಧಾಮ ಕುತಂತ್ರದ ಸಂಪೂರ್ಣ ಹಿಡಿತಕ್ಕೆ ರಂಗಮ್ಮನು ಸಿಕ್ಕಾಗ ಆಕೆಯ ಪತಿ ಗಣಪತಿ ಗಂಭೀರ ಅನಾರೋಗ್ಯಕ್ಕೆ ಒಳಗಾಗುತ್ತಾನೆ. ಗಣಪತಿಯ ಮರಣದ ನಂತರ, ಲೋಖಾನಧಾಮ್ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಅದನ್ನು ಕೊಂಡಯ್ಯನ ಬಳಿ ಅಡವಿಡುತ್ತಾನೆ. ಆ ಸಮಯದಲ್ಲಿ ರಂಗಮ್ಮ ಕೃಷ್ಣನನ್ನು ಮನೆಯಿಂದ ಹೊರಹಾಕುತ್ತಾಳೆ. ಕೊಂಡಯ್ಯ ಆ ಮನೆಯನ್ನು ಆಕ್ರಮಿಸಿಕೊಂಡು ರಂಗಮ್ಮನಿಗೂ ನೆಲೆಯಿಲ್ಲದಂತೆ ಮಾಡಿಬಿಡುತ್ತಾನೆ. ನಿರ್ಗತಿಕಳಾಗಿದ್ದ ರಂಗಮ್ಮಳಿಗೆ ಕೃಷ್ಣ ಮತ್ತು ರಾಧಾ ಸಹಾಯ ಮಾಡುತ್ತಾರೆ. ರಂಗಮ್ಮಳ ಮನೆಗೆ ಕಾವಲಿದ್ದ ಕಪ್ಪು ಕಾವಲುಗಾರರನ್ನು ಇವರೇ ಓಡಿಸುತ್ತಾರೆ ಮತ್ತು ಲೋಖಾನಾಧಾಮನ ವರ್ತನೆಯಲ್ಲಿ ಸುಧಾರಣೆ ತರುತ್ತಾರೆ. ಅಂತಿಮವಾಗಿ ರಂಗಮ್ಮನಿಗೆ ಇವರಿಬ್ಬರ ಸದ್ಗುಣದ ಅರಿವಾಗುತ್ತದೆ. ಅಂತಿಮವಾಗಿ ಕುಟುಂಬದ ಒಗ್ಗಟ್ಟಿನೊಂದಿಗೆ ಚಲನಚಿತ್ರವು ಸಂತೋಷದಿಂದ ಕೊನೆಗೊಳ್ಳುತ್ತದೆ. == ಪಾತ್ರವರ್ಗ == ಕೃಷ್ಣನಾಗಿ ಅಕ್ಕಿನೇನಿ ನಾಗೇಶ್ವರ ರಾವ್ ರಾಧಾ ಪಾತ್ರದಲ್ಲಿ ಅಂಜಲಿ ದೇವಿ ಲೋಕನಾಧಮ್ ಆಗಿ ರೇಲಂಗಿ ಗುಮ್ಮಡಿ ಅಧ್ಯಕ್ಷರಾಗಿ ಕೊಂಡಯ್ಯ ಗಣಪತಿ ಪಾತ್ರದಲ್ಲಿ ಚದಲವಾಡ ಪೆರೈಯಾ ಪಾತ್ರದಲ್ಲಿ ಅಲ್ಲು ರಾಮಲಿಂಗಯ್ಯ ರಾಮಯ್ಯನಾಗಿ ಪೆರುಮಾಳ್ ಶ್ರೀರಂಗಂ ಪಾತ್ರದಲ್ಲಿ ಬಾಲಕೃಷ್ಣ ರಂಗಮ್ಮನಾಗಿ ಕನ್ನಂಬ ಕಲಾವತಿಯಾಗಿ ರಾಜಾ ಸುಲೋಚನ ಮಚ್ಚಮ್ಮಳಾಗಿ ಛಾಯಾ ದೇವಿ ಸ್ವರಾಜ್ಯವಾಗಿ ಸೂರ್ಯಕಲಾ == ಸಿಬ್ಬಂದಿ == ಕಲೆ: ಥೋಟಾ ನೃತ್ಯ ಸಂಯೋಜನೆ ಎ. ಕೆ. ಚೋಪ್ರಾ, ವೇಣು ಗೋಪಾಲ್ ಸಾಹಿತ್ಯ: ಲೇಖಕ ಸಮುದ್ರಲಾ ಸೀನಿಯರ್, ಲೇಖಕ ಶ್ರೀ ಶ್ರೀ, ಲೇಖಕ ಕೊಸರಾಜು ಅರುದ್ರ, ಲೇಖಕ ಮಲ್ಲಡಿ ರಾಮಕೃಷ್ಣ ಶಾಸ್ತ್ರಿ ಹಿನ್ನೆಲೆ ಗಾಯಕರು: ಘಂಟಸಾಲ, ಪಿ. ಸುಶೀಲಾ, ಜಿಕ್ಕಿ, ಮಾಧವಪೆಡ್ಡಿ ಸತ್ಯಂ, ಪಿಠಾಪುರಂ, ಪಿ. ಲೀಲಾ, ಸ್ವರ್ಣಲತಾ ಸಂಗೀತ: ಎಸ್. ರಾಜೇಶ್ವರ ರಾವ್, ಮಾಸ್ಟರ್ ವೇಣು ಕಥೆ-ಸಂಭಾಷಣೆ ಪಿನಿಸೆಟ್ಟಿ ಶ್ರೀರಾಮ ಮೂರ್ತಿ ಸಂಕಲನ: ಎಂ. ಬಾಬು ಛಾಯಾಗ್ರಹಣ ಟಿ. ಎಸ್. ಅಜಿತ್ ಕುಮಾರ್ ನಿರ್ಮಾಪಕ ಎಂ. ನಾರಾಯಣ ಸ್ವಾಮಿ, ಎಂ. ವೆಂಕಟ ರಾಮದಾಸು ಚಿತ್ರಕಥೆ-ನಿರ್ದೇಶಕ ಆದುರ್ತಿ ಸುಬ್ಬಾ ರಾವ್ ಬ್ಯಾನರ್ ಪ್ರಭಾ ಪ್ರೊಡಕ್ಷನ್ಸ್ ಬಿಡುಗಡೆಯ ದಿನಾಂಕಃ 6 ಆಗಸ್ಟ್ 1958 == ಸೌಂಡ್ಟ್ರ್ಯಾಕ್ == ಎಸ್. ರಾಜೇಶ್ವರ ರಾವ್ ಮತ್ತು ಮಾಸ್ಟರ್ ವೇಣು ಸಂಗೀತ ಸಂಯೋಜಿಸಿದ್ದಾರೆ. ಸಂಗೀತವನ್ನು ಆಡಿಯೋ ಕಂಪನಿಯಲ್ಲಿ ಬಿಡುಗಡೆ ಮಾಡಲಾಯಿತು. == ಉಲ್ಲೇಖಗಳು ==